ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಎಸ್. ವಿ. ಉದಯ ಕುಮಾರ ಶೆಟ್ಟಿಯವರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 28 , 2014
|
ಡಿಸೆ೦ಬರ್ 28, 2014
|
ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಎಸ್. ವಿ. ಉದಯ ಕುಮಾರ ಶೆಟ್ಟಿಯವರಿಗೆ ಸನ್ಮಾನ
ಮಣಿಪಾಲ :
ಈ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಯಕ್ಷಗಾನ ವಿಮರ್ಶಕ ಬರಹಗಾರ ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟಿಯವರಿಗೆ ಉಡುಪಿಯ ರಂಗಸ್ಥಳ ಸಂಸ್ಥೆಯ ವತಿಯಿಂದ ಸಂಸ್ಥೆಯ ಗೌರವಾದ್ಯಕ್ಷ ಮನೋಹರ ಶೆಟ್ಟಿಯವರು ಸನ್ಮಾನಿಸಿದರು. ರಂಗಸ್ಥಳ ಮೆನೆಜಿಂಗ್ ಟ್ರಷ್ಟಿ ಮಾಜಿ ಶಾಸಕ ಯು. ಆರ್ ಸಬಾಪತಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.
ರಂಗಸ್ಥಳದ ಅದ್ಯಕ್ಷ ಬನ್ನಾಡಿ ಶೇಷಪ್ಪ ಶೆಟ್ಟಿ, ಕಾರ್ಯದರ್ಶಿ ಮಹಾಬಲಕುಂದರ್. ಪೆರ್ಡೂರು ಮೇಳದ ವ್ಯವಸ್ಥಾಪಕ ವೈ. ಕರುಣಾಕರ ಶೆಟ್ಟಿ, ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಿ. ಕಿಶನ್ ಹೆಗ್ಡೆ, ಸದಾನಂದ ಪಾಟೀಲ್, ಮೇಟಿ ಮುದಿಯಪ್ಪ, ತೆಂಕಿಲ್ಲಾಯ, ಮುಂತಾದವರು ಉಪಸ್ಥಿತರಿದ್ದರು. ಕಾಪು ಸುಂದರ ಶೆಟ್ಟಿಯವರ ಸಂಸ್ಮರಣೆ ನೆಡೆಸಲಾಯಿತು. ಸುಂದರ ಶೆಟ್ಟಿಯವರ ಪುತ್ರರು ಕುಟುಂಬಸ್ಥರು ಉಪಸ್ಥಿತರಿದ್ದರು.
|
|
|